masthmagaa.com:

ಮಂಗಳೂರು: ರಾಜ್ಯದಲ್ಲಿ ಡ್ರಗ್ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪಬ್​ಗಳನ್ನು ಮುಚ್ಚಿಸುವಂತೆ ಅಲ್ಲಿನ ಪೊಲೀಸ್ ಕಮಿಷನರ್​ಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್​ ಸೂಚಿಸಿದ್ದಾರೆ ಅಂತ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮುಂದುವರೆದು ಸರ್ಕಾರದ ಕೈಯಲ್ಲಿ ಆಗದಿದ್ರೆ ಯುವಕರೇ ಕೋರ್ಟ್​ಗೆ ಹೋಗಿ ಪಬ್​ಗಳನ್ನು ಬಂದ್ ಮಾಡಿ ಅಂತ ಕಟೀಲ್ ಹೇಳಿದ್ದಾರೆ.

‘ನಮ್ಮ ಕಾಲದಲ್ಲಿ ಪಬ್​ಗಳ ಕಾರ್ಯಾಚರಣೆಯನ್ನು ನಾವು ನಿಲ್ಲಿಸಿದ್ದೆವು. ಈಗ ನಮ್ಮ ಜಿಲ್ಲೆಯಲ್ಲಿರುವ (ದಕ್ಷಿಣ ಕನ್ನಡ) ಎಲ್ಲಾ ಪಬ್​ಗಳನ್ನು ಮುಚ್ಚಬೇಕೆಂದು ಕಮಿಷನರ್​ಗೆ ಹೇಳಿದ್ದೇನೆ. ಈ ಪಬ್​ಗಳು ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿವೆ. ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯದ ಮೂಲಕ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಯುವ ಮೋರ್ಚಾಗೆ ತಿಳಿಸುತ್ತೇನೆ’ ಅಂತ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

-masthmagaa.com

 

Contact Us for Advertisement

Leave a Reply