masthmagaa.com:
ಮಂಗಳೂರು: ರಾಜ್ಯದಲ್ಲಿ ಡ್ರಗ್ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪಬ್ಗಳನ್ನು ಮುಚ್ಚಿಸುವಂತೆ ಅಲ್ಲಿನ ಪೊಲೀಸ್ ಕಮಿಷನರ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ ಅಂತ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮುಂದುವರೆದು ಸರ್ಕಾರದ ಕೈಯಲ್ಲಿ ಆಗದಿದ್ರೆ ಯುವಕರೇ ಕೋರ್ಟ್ಗೆ ಹೋಗಿ ಪಬ್ಗಳನ್ನು ಬಂದ್ ಮಾಡಿ ಅಂತ ಕಟೀಲ್ ಹೇಳಿದ್ದಾರೆ.
‘ನಮ್ಮ ಕಾಲದಲ್ಲಿ ಪಬ್ಗಳ ಕಾರ್ಯಾಚರಣೆಯನ್ನು ನಾವು ನಿಲ್ಲಿಸಿದ್ದೆವು. ಈಗ ನಮ್ಮ ಜಿಲ್ಲೆಯಲ್ಲಿರುವ (ದಕ್ಷಿಣ ಕನ್ನಡ) ಎಲ್ಲಾ ಪಬ್ಗಳನ್ನು ಮುಚ್ಚಬೇಕೆಂದು ಕಮಿಷನರ್ಗೆ ಹೇಳಿದ್ದೇನೆ. ಈ ಪಬ್ಗಳು ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿವೆ. ಒಂದು ವೇಳೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯದ ಮೂಲಕ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಯುವ ಮೋರ್ಚಾಗೆ ತಿಳಿಸುತ್ತೇನೆ’ ಅಂತ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
In our time we stopped operation of clubs. I told Commissioner y'day that we should shut down all pubs in dist. It's ruining youngsters. If govt doesn't take decision, I'll inform youth wing to take appropriate legal action via court: Nalinkumar Kateel, Karnataka BJP chief (17.9) pic.twitter.com/xBYseL7igr
— ANI (@ANI) September 18, 2020
-masthmagaa.com
Contact Us for Advertisement