ಭಾರತಕ್ಕೆ ಸಿಕ್ಕಿತು ಪಾಕಿಸ್ತಾನದ ರಹಸ್ಯ ಪತ್ರ..! ಅದರಲ್ಲೇನಿದೆ ಗೊತ್ತಾ..?

masthmagaa.com:

ದೆಹಲಿ: ಪಾಪಿಗಳ ದೇಶ ಪಾಕಿಸ್ತಾನ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್​ ಫೋರ್ಸ್​ ವಾರ್ನಿಂಗ್ ಬಳಿಕವೂ ಉಗ್ರರಿಗೆ ನೆರವು ನೀಡುವ ತನ್ನ ಬುದ್ಧಿಯನ್ನು ಮುಂದುವರಿಸಿದೆ ಅನ್ನೋದು ಗೊತ್ತಾಗಿದೆ. ಭಾರತೀಯ ಭದ್ರತಾ ಸಂಸ್ಥೆಗಳಿಗೆ ದೊರೆತಿರುವ ಪಾಕಿಸ್ತಾನದ ಪತ್ರವೊಂದು ಪಾಕಿಸ್ತಾನದ ಕರಾಳ ಮುಖವನ್ನು ಬಯಲಿಗೆಳೆದಿದೆ.

ಪಾಕಿಸ್ತಾನದ ಐಎಸ್​ಐ ಭಾರತದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂಲಕ ಭಯೋತ್ಪಾದನೆ ಹರಡುವ ಕೆಲಸ ಮಾಡ್ತಿದೆ. ಇದರ ಮೇಲ್ವಿಚಾರಣೆಯನ್ನು ಯೂಸೂಫ್ ಶಾ ಅಂದ್ರೆ ಸೈಯದ್ ಸಲಾಹುದ್ದೀನ್ ನೋಡಿಕೊಳ್ತಾನೆ. ಈತ ಯುನೈಟೆಡ್ ಜಿಹಾದ್ ಕೌನ್ಸಿಲ್​​​ನ ಮುಖ್ಯಸ್ಥ ಕೂಡ ಹೌದು. ಜೈಷ್ ಎ ಮೊಹ್ಮದ್ ಮತ್ತು ಲಷ್ಕರ್ ಎ ತೊಯ್ಬಾದಂತ ಭಯೋತ್ಪಾದಕ ಸಂಘಟನೆಗಳು ಇದರ ಅಡಿಯಲ್ಲಿ ಕೆಲಸ ಮಾಡುತ್ತವೆ. 2020ರ ಮೇ 6ರಂದು ಭಾರತೀಯ ಭದ್ರತಾ ಪಡೆ ಸೈಯದ್ ಸಲಾಹುದ್ದೀನ್​​​ನ ಇಬ್ಬರು ಮಕ್ಕಳನ್ನು ಅರೆಸ್ಟ್ ಮಾಡಿ, ಇಬ್ಬರು ಹಿಂಬಾಲಕರನ್ನು ಹೊಡೆದುರುಳಿಸಿದ್ದರು. ಹೀಗಾಗಿ ಸಲಾಹುದ್ದೀನ್ ಭಾರತದಲ್ಲಿ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾನೆ ಅನ್ನೋ ಮಾಹಿತಿ ಕೂಡ ಇದೆ.

ಈ ನಡುವೆ ಭಾರತದ ಭದ್ರತಾ ಸಂಸ್ಥೆಗಳಿಗೆ ಒಂದು ಪತ್ರ ಸಿಕ್ಕಿದ್ದು, ಸಲಾಹುದ್ದೀನ್ ಅಂದ್ರೆ ಯೂಸೂಫ್ ಶಾ ಪಾಕಿಸ್ತಾನದ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಯಾಗಿದ್ದು, ಐಎಸ್​ಐಗೆ ಕೆಲಸ ಮಾಡುತ್ತಾನೆ ಅಂತ ಸ್ಪಷ್ಟವಾಗಿ ಹೇಳಲಾಗಿದೆ. ಯೂಸೂಫ್ ಎಲ್ಲಾ ದಾಖಲೆ ಕ್ಲಿಯರ್ ಆಗಿದ್ದು, ಅವರನ್ನು ಅನಾವಶ್ಯಕವಾಗಿ ಎಲ್ಲೂ ತಡೆಯಬಾರದು ಅಂತ ಸೂಚಿಸಲಾಗಿದೆ. ಡಿಸೆಂಬರ್ 21, 2020ರವರೆಗೆ ಈ ದಾಖಲೆಪತ್ರ ಮಾನ್ಯವಾಗಿದ್ದು, ಅದರಲ್ಲಿ ಯುಸೂಫ್ ಬಳಸುತ್ತಿರುವ ಕಾರಿನ ಹೆಸರು ಕೂಡ ಉಲ್ಲೇಖಿಸಲಾಗಿದೆ.

ಅಕ್ಟೋಬರ್​​ನಲ್ಲಿ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್​ ಫೋರ್ಸ್​  ಸಭೆ ನಡೆಯಲಿದ್ದು, ಪಾಕಿಸ್ತಾನದ ನರಿಬುದ್ಧಿಯನ್ನು ಜಗತ್ತಿನ ಮುಂದಿಡಲು ಭಾರತಕ್ಕೆ ಈ ಪತ್ರ ನೆರವಾಗಲಿದೆ.

-masthmagaa.com

Contact Us for Advertisement

Leave a Reply