masthmagaa.com:
ದೆಹಲಿ: ಪಾಪಿಗಳ ದೇಶ ಪಾಕಿಸ್ತಾನ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ವಾರ್ನಿಂಗ್ ಬಳಿಕವೂ ಉಗ್ರರಿಗೆ ನೆರವು ನೀಡುವ ತನ್ನ ಬುದ್ಧಿಯನ್ನು ಮುಂದುವರಿಸಿದೆ ಅನ್ನೋದು ಗೊತ್ತಾಗಿದೆ. ಭಾರತೀಯ ಭದ್ರತಾ ಸಂಸ್ಥೆಗಳಿಗೆ ದೊರೆತಿರುವ ಪಾಕಿಸ್ತಾನದ ಪತ್ರವೊಂದು ಪಾಕಿಸ್ತಾನದ ಕರಾಳ ಮುಖವನ್ನು ಬಯಲಿಗೆಳೆದಿದೆ.
ಪಾಕಿಸ್ತಾನದ ಐಎಸ್ಐ ಭಾರತದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂಲಕ ಭಯೋತ್ಪಾದನೆ ಹರಡುವ ಕೆಲಸ ಮಾಡ್ತಿದೆ. ಇದರ ಮೇಲ್ವಿಚಾರಣೆಯನ್ನು ಯೂಸೂಫ್ ಶಾ ಅಂದ್ರೆ ಸೈಯದ್ ಸಲಾಹುದ್ದೀನ್ ನೋಡಿಕೊಳ್ತಾನೆ. ಈತ ಯುನೈಟೆಡ್ ಜಿಹಾದ್ ಕೌನ್ಸಿಲ್ನ ಮುಖ್ಯಸ್ಥ ಕೂಡ ಹೌದು. ಜೈಷ್ ಎ ಮೊಹ್ಮದ್ ಮತ್ತು ಲಷ್ಕರ್ ಎ ತೊಯ್ಬಾದಂತ ಭಯೋತ್ಪಾದಕ ಸಂಘಟನೆಗಳು ಇದರ ಅಡಿಯಲ್ಲಿ ಕೆಲಸ ಮಾಡುತ್ತವೆ. 2020ರ ಮೇ 6ರಂದು ಭಾರತೀಯ ಭದ್ರತಾ ಪಡೆ ಸೈಯದ್ ಸಲಾಹುದ್ದೀನ್ನ ಇಬ್ಬರು ಮಕ್ಕಳನ್ನು ಅರೆಸ್ಟ್ ಮಾಡಿ, ಇಬ್ಬರು ಹಿಂಬಾಲಕರನ್ನು ಹೊಡೆದುರುಳಿಸಿದ್ದರು. ಹೀಗಾಗಿ ಸಲಾಹುದ್ದೀನ್ ಭಾರತದಲ್ಲಿ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾನೆ ಅನ್ನೋ ಮಾಹಿತಿ ಕೂಡ ಇದೆ.
ಈ ನಡುವೆ ಭಾರತದ ಭದ್ರತಾ ಸಂಸ್ಥೆಗಳಿಗೆ ಒಂದು ಪತ್ರ ಸಿಕ್ಕಿದ್ದು, ಸಲಾಹುದ್ದೀನ್ ಅಂದ್ರೆ ಯೂಸೂಫ್ ಶಾ ಪಾಕಿಸ್ತಾನದ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಯಾಗಿದ್ದು, ಐಎಸ್ಐಗೆ ಕೆಲಸ ಮಾಡುತ್ತಾನೆ ಅಂತ ಸ್ಪಷ್ಟವಾಗಿ ಹೇಳಲಾಗಿದೆ. ಯೂಸೂಫ್ ಎಲ್ಲಾ ದಾಖಲೆ ಕ್ಲಿಯರ್ ಆಗಿದ್ದು, ಅವರನ್ನು ಅನಾವಶ್ಯಕವಾಗಿ ಎಲ್ಲೂ ತಡೆಯಬಾರದು ಅಂತ ಸೂಚಿಸಲಾಗಿದೆ. ಡಿಸೆಂಬರ್ 21, 2020ರವರೆಗೆ ಈ ದಾಖಲೆಪತ್ರ ಮಾನ್ಯವಾಗಿದ್ದು, ಅದರಲ್ಲಿ ಯುಸೂಫ್ ಬಳಸುತ್ತಿರುವ ಕಾರಿನ ಹೆಸರು ಕೂಡ ಉಲ್ಲೇಖಿಸಲಾಗಿದೆ.
ಅಕ್ಟೋಬರ್ನಲ್ಲಿ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಸಭೆ ನಡೆಯಲಿದ್ದು, ಪಾಕಿಸ್ತಾನದ ನರಿಬುದ್ಧಿಯನ್ನು ಜಗತ್ತಿನ ಮುಂದಿಡಲು ಭಾರತಕ್ಕೆ ಈ ಪತ್ರ ನೆರವಾಗಲಿದೆ.
-masthmagaa.com
Contact Us for Advertisement