masthmagaa.com:
ಜಮ್ಮು-ಕಾಶ್ಮೀರ: ಶ್ರೀನಗರದ ಬಾಟಮಾಲೂ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭಾರತೀಯ ಭದ್ರತಾ ಪಡೆಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಉಗ್ರರ ಮೃತದೇಹಗಳ ಜೊತೆಗೆ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ. ದುರದೃಷ್ಟವಶಾತ್ ಕಾರ್ಯಾಚರಣೆ ವೇಳೆ ಓರ್ವ ನಾಗರಿಕ ಮೃತಪಟ್ಟಿದ್ದು, ಸಿಆರ್ಪಿಎಫ್ನ ಉಪ ಕಮಾಂಡಂಟ್ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವರ್ಷದಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿದ 72 ಕಾರ್ಯಾಚರಣೆಯಲ್ಲಿ ಒಟ್ಟು 177 ಉಗ್ರರನ್ನು ಹೊಡೆದು ಹಾಕಲಾಗಿದೆ. ಅದ್ರಲ್ಲೂ ಶ್ರೀನಗರ ಒಂದರಲ್ಲೇ 7 ಕಾರ್ಯಾಚರಣೆ ನಡೆದಿದ್ದು 16 ಭಯೋತ್ಪಾದಕರನ್ನು ಮಟಾಷ್ ಮಾಡಲಾಗಿದೆ ಅಂತ ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
-masthmagaa.com
Contact Us for Advertisement