masthmagaa.com:
ಉತ್ತರ ಪ್ರದೇಶ: ಫಿರೋಜಾಬಾದ್ನಲ್ಲಿ ಸ್ಥಳೀಯ ಬಿಜೆಪಿ ನಾಯಕನನ್ನು ಹತ್ಯೆ ಮಾಡಲಾಗಿದೆ. ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿಟ್ಟು ಪರಾರಿಯಾಗಿದ್ದಾರೆ. ಮೃತ ಬಿಜೆಪಿ ನಾಯಕನನ್ನು ದಯಾಶಂಕರ್ ಗುಪ್ತಾ ಎಂದು ಗುರುತಿಸಲಾಗಿದೆ. ಇವರ ಕುಟುಂಬಸ್ಥರ ಆರೋಪದ ಮೇರೆಗೆ ಬಿಜೆಪಿಯ ಸ್ಥಳೀಯ ನಾಯಕರಾದ ವಿರೇಶ್ ತೋಮರ್, ನರೇಂದ್ರ ತೋಮರ್ ಮತ್ತು ದೇವೇಂದ್ರ ತೋಮರ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ವಿರೇಶ್ ತೋಮರ್ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಮಂಡಲ ಪ್ರೆಸಿಡೆಂಟ್ ಆಗಿದ್ದ ದಯಾಶಂಕರ್ಗೆ ಇದು ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ಫೇಸ್ಬುಕ್ನಲ್ಲೂ ಕೂಡ ದಯಾಶಂಕರ್ ಮತ್ತು ವಿರೇಶ್ ತೋಮರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದ್ರ ನಡುವೆಯೇ ನಿನ್ನೆ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದ ದಯಾಶಂಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
-masthmagaa.com
Contact Us for Advertisement