masthmagaa.com:

ಬಾಲಿವುಡ್ ನಟಿ ಕಂಗನಾ ರನಾವತ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಿನ ಸಂಘರ್ಷ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಇದೀಗ ಮಾತನಾಡಿರುವ ಕಂಗನಾ, ಡ್ರಗ್ ಪೆಡ್ಲರ್​ಗಳ ಜೊತೆ ನನಗೆ ಸಂಪರ್ಕವಿದೆ ಅನ್ನೋದು ಸಾಬೀತಾದ್ರೆ, ನನ್ನ ತಪ್ಪನ್ನು ಒಪ್ಪಿಕೊಂಡು ಶಾಶ್ವತವಾಗಿ ಮುಂಬೈ ಬಿಟ್ಟು ಹೋಗ್ತೀನಿ ಎಂದಿದ್ದಾರೆ. ಇದಕ್ಕಾಗಿ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಗೃಹ ಸಚಿವರಾದ ಅನಿಲ್ ದೇಶ್​ಮುಖ್ ಅವರು ನನ್ನ ಡ್ರಗ್ ಟೆಸ್ಟ್ ಮಾಡಿಸಲಿ. ನನ್ನ ದೂರವಾಣಿ ಕರೆಗಳನ್ನ ಕೂಡ ಪರಿಶೀಲಿಸಲಿ ಅಂತ ಹೇಳಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್, ‘ಕಂಗನಾ ರನಾವತ್ ಡ್ರಗ್ಸ್ ಸೇವಿಸುತ್ತಿದ್ದಳು ಮತ್ತು ನನ್ನನ್ನು ಕೂಡ ಡ್ರಗ್ಸ್​ ಸೇವಿಸುವಂತೆ ಬಲವಂತ ಮಾಡುತ್ತಿದ್ದಳು ಅಂತ ಬಾಲಿವುಡ್ ನಟ ಅಧ್ಯಾಯನ್ ಸುಮನ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕಂಗನಾ ಮತ್ತು ಆತನ ನಡುವೆ ಸಂಬಂಧವಿತ್ತು ಅನ್ನೋದು ಕೂಡ ಗೊತ್ತಾಗಿದೆ. ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಾರೆ’ ಅಂತ ಹೇಳಿದ್ರು. ಅದಕ್ಕೀಗ ನಟಿ ಕಂಗನಾ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಹಿಂದೆ ‘ಮುಂಬೈ ಪಾಕ್​ ಆಕ್ರಮಿತ ಕಾಶ್ಮೀರವೇ..?’ ಅಂತ ಕಂಗನಾ ರನಾವತ್ ಟ್ವೀಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಮಹಾರಾಷ್ಟ್ರ ಸರ್ಕಾರ ‘ಹೀಗೆ ಮಾತನಾಡುವ ಕಂಗನಾಗೆ ಮುಂಬೈನಲ್ಲಿರುವ ಅರ್ಹತೆ ಇಲ್ಲ’ ಅಂತ ಹೇಳಿತ್ತು. ಜೊತೆಗೆ ಕಂಗನಾ ಅವರ ಕಚೇರಿಯನ್ನು ಕೆಡವಲು ಮುಂಬೈ ಮಹಾನಗರ ಪಾಲಿಕೆ ಮುಂದಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ಗೃಹ ಇಲಾಖೆ ಕಂಗನಾಗೆ Y+ ಭದ್ರತೆ ನೀಡಿದೆ. ಸೆಪ್ಟೆಂಬರ್ 9ರಂದು ಕಂಗನಾ ರನಾವತ್ ಮುಂಬೈಗೆ ಬರಲಿದ್ದಾರೆ.

-masthmagaa.com

Contact Us for Advertisement

Leave a Reply