masthmagaa.com: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಗ್ರೀನ್​ ಸಿಗ್ನಲ್​ ಕೊಟ್ಟು, ಮಸೀದಿ ನಿರ್ಮಾಣಕ್ಕೆ ಉತ್ತರಪ್ರದೇಶ ಧನ್ನಿಪುರ್​ನಲ್ಲಿ ಜಾಗ ನೀಡಲಾಗಿತ್ತಲಾ.. ಇವತ್ತು ಆ ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 72ನೇ ಗಣರಾಜ್ಯೋತ್ಸವ ದಿನವಾದ ಇವತ್ತು ಧ್ವಜಾರೋಹಣ ನೆರವೇರಿಸಿ, ಗಿಡವನ್ನ ನೆಡುವ ಮೂಲಕ ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಮಸೀದಿಯ ನಿರ್ಮಾಣ ಕೆಲಸವನ್ನ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆಯಂದೇ ಶುರು ಮಾಡೋದಾಗಿ ಈ ಹಿಂದೆಯೇ ಇಂಡೋ-ಇಸ್ಲಾಮಿಕ್​ ಕಲ್ಚರಲ್ ಫೌಂಡೇಷನ್ ಹೇಳಿತ್ತು. ಅದರಂತೆ ಇವತ್ತು ಚಾಲನೆ ಕೊಡಲಾಗಿದೆ. ಮಸೀದಿ ನಿರ್ಮಾಣ ಆಗ್ತಿರೋ ಜಾಗವು ರಾಮ ಜನ್ಮಭೂಮಿಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ದೆಹಲಿಯಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆ ಮುಖಂಡರು ಮಾತನಾಡಿದ್ದಾರೆ. ಹಿಂಸಾಚಾರ ಮಾಡ್ದೋರು ಯಾರು ಅಂತ ನಾವು ಕಂಡುಹಿಡಿದಿದ್ದೀವಿ. ಅವರೆಲ್ಲಾ ರಾಜಕೀಯ ಪಕ್ಷದವರು. ನಮ್ಮ ಹೋರಾಟಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡಿದ್ದಾರೆ ಅಂತ ಭಾರತೀಯ ಕಿಸಾನ್​​ ಯೂನಿಯನ್ ಹೇಳಿದೆ. ಮತ್ತೊಂದು ರೈತ ಸಂಘಟನೆ, ಸಂಯುಕ್ತ ಕಿಸಾನ್ ಮೋರ್ಚಾದವರು ಮಾತನಾಡಿ, ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸ್ತಿದ್ವಿ. ಆದ್ರೆ ಕೆಲವೊಂದು ಸಮಾಜಘಾತುಕ ಶಕ್ತಿಗಳು ನಮ್ಮ ಪ್ರತಿಭಟನೆಯಲ್ಲಿ ಹೀಗೆ ಮಾಡಿವೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಯಾವುದಾದ್ರೂ ಸಮಸ್ಯೆಗೆ ಹಿಂಸೆ ಅನ್ನೋದಿ ಸೊಲ್ಯೂಷನ್ ಅಲ್ಲ. ಯಾರಿಗೆ ಗಾಯವಾದ್ರೂ ಅದು ದೇಶಕ್ಕಾಗುವ ನಷ್ಟ. ದೇಶದ ಹಿತಕ್ಕಾಗಿ ಮೂರು ಕೃಷಿ ಕಾನೂನುಗಳನ್ನ ವಾಪಸ್ ಪಡೀರಿ ಅಂತ ಹೇಳಿದ್ದಾರೆ. ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ದೆಹಲಿಯಲ್ಲಿ ಹೀಗೆಲ್ಲಾ ಮಾಡ್ದೋರು ರೈತರಲ್ಲ. ಅವರು ಭಯೋತ್ಪಾದಕರು. ಅವರಿಗೆ ಉಗ್ರ ಸಂಘಟನೆಗಳ ಬೆಂಬಲವಿದೆ. ಕಾಂಗ್ರೆಸ್ ಪಕ್ಷದ ಬೆಂಬಲವಿದೆ ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಕೃಷಿ ಕಾನೂನುಗಳನ್ನ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರೋ ರೈತರು ಕೆಂಪುಕೋಟೆ ಮೇಲೆ ಅನ್ಯ ಬಾವುಟವನ್ನ ಹಾರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಪ್ರಧಾನಿಗಳು ಇದೇ ಸ್ಥಳದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಆದ್ರೀಗ ಇದೇ ಸ್ಥಳದಲ್ಲಿ ಬೇರೊಂದು ಬಾವುಟವನ್ನ ಹಾರಿಸಿ ಅಗೌರವ ಸಲ್ಲಿಸಲಾಗಿದೆ. ಇಷ್ಟೇ ಅಲ್ಲ ಕೆಂಪುಕೋಟೆಯ ಒಂದು ಗುಮ್ಮಟ ಮೇಲೂ ಹತ್ತಿದ ಪ್ರತಿಭಟನಾಕಾರರು ಅದರ ಮೇಲೂ ಬಾವುಟ ಹಾರಿಸಿದ್ದಾರೆ. ಅಂದ್ಹಾಗೆ ಕೆಂಪು ಕೋಟೆ ಮೇಲೆ ಪ್ರತಿಭಟನಾಕಾರರು ಹಾರಿಸಿರೋದು ಖಲಿಸ್ತಾನ ಬಾವುಟ ಅಂತ ಕೆಲವರು ಹೇಳ್ತಿದ್ರೆ.. ಇನ್ನೂ ಕೆಲವರು ಇದು ಸಿಖ್ಖರ ಬಾವುಟ (ನಿಶಾನಾ ಸಾಹಿಬಾ) ಅಂತ ಹೇಳ್ತಿದ್ದಾರೆ. ಎರಡೂ ಬಾವುಟಗಳಲ್ಲಿರುವ ಸಿಂಬಲ್​ ಬಹುತೇಕ ಸೇಮ್ ಇದೆ. ಹೀಗಾಗಿ ಗೊಂದಲ ಸೃಷ್ಟಿಯಾಗಿದೆ. ಅದೇನೇ ಇದ್ರೂ, ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಹೊರತುಪಡಿಸಿ ಬೇರೆ ಯಾವುದೇ ಬಾವುಟವನ್ನ ಹಾರಿಸೋ ಹಾಗಿಲ್ಲ. ಪ್ರತಿಭಟನಾಕಾರರು ಅದನ್ನ ಮಾಡಿ ರಾಷ್ಟ್ರಧ್ವಜಕ್ಕೆ ಅಗೌರವ ಮಾಡಿದ್ದಾರೆ. ರೈತರ ಹೋರಾಟವನ್ನ ಖಲಿಸ್ತಾನಿಗಳು ಹೈಜಾಕ್ ಮಾಡಿದ್ದಾರೆ ಅನ್ನೋ ಮಾತುಗಳು ಈ ಹಿಂದಿನಿಂದಲೂ ಕೇಳಿ ಬಂದಿತ್ತು. -masthmagaa.com Share on: WhatsAppContact Us forRead More →

masthmagaa.com: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದಿದೆ. ಶಾಂತಿಯುತವಾಗಿ ರ್ಯಾಲಿ ಮಾಡ್ತೀವಿ ಅಂದಿದ್ದ ಪ್ರತಿಭಟನಾಕಾರರು ಇವತ್ತು ಖಡ್ಗ, ರಾಡ್​, ದೊಣ್ಣೆಗಳನ್ನ ಹಿಡ್ಕೊಂಡು ರಸ್ತೆಗೆ ಇಳಿದಿದ್ದಾರೆ. ಪೊಲೀಸರನ್ನ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದರಿಂದ ಪೊಲೀಸರು ದಿಕ್ಕಾಪಾಲಾಗಿ ಓಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ತಮ್ಮ ಕೈಗೆ ಸಿಕ್ಕ ಪೊಲೀಸರನ್ನ ಹಿಡಿದು ಹಲ್ಲೆ ಮಾಡಿದ್ದಾರೆ ಪ್ರತಿಭಟನಾಕಾರರು. ಕೆಲವರಂತೂ ಪೊಲೀಸರ ಮೇಲೆ ಟ್ರಾಕ್ಟರ್​ಗಳನ್ನ ಹತ್ತಿಸಲು ಯತ್ನಿಸಿದ್ದಾರೆ. ರೈತರನ್ನ ತಡೆಯಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನ ಜೆಸಿಬಿ, ಕ್ರೇನ್​ಗಳ ಮೂಲಕ ಕಿತ್ತೆಸೆದಿದ್ದಾರೆ. ಇದರ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿ ಈಗ ರಣರಂಗವಾಗಿ ಬದಲಾಗಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಮೆಟ್ರೋ ಸಂಚಾರವನ್ನ ಬಂದ್ ಮಾಡಲಾಗಿದೆ. ರೈತರು ಟ್ರಾಕ್ಟರ್​ಗಳ ಮೂಲಕ ಕೆಂಪು ಕೋಟೆ ಕೂಡ ತಲುಪಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: 72ನೇ ಗಣರಾಜ್ಯೋತ್ಸವ ಪರೇಡ್​ ಹಲವು ಮೊದಲುಗಳಿಗೆ ಸಾಕ್ಷಿಯಾಯ್ತು. ಅದೇ ರೀತಿ ಕೊರೋನಾದಿಂದಾಗಿ ಕೆಲವೊಂದು ಮಿಸ್ ಕೂಡ ಆದ್ವು. ಮೊದಲುಗಳನ್ನ ನೋಡೋದಾದ್ರೆ, 122 ಸದಸ್ಯರ ಬಾಂಗ್ಲಾದೇಶದ ಸೇನಾ ತಂಡ, ವಾಯುಪಡೆಯ ಇಬ್ಬರು ಮಹಿಳಾ ಪೈಲಟ್​ಗಳು, ರಫೇಲ್ ಯುದ್ಧ ವಿಮಾನಗಳು, ಅಂಡಮಾನ್​-ನಿಕೋಬಾರ್ ದ್ವೀಪದಲ್ಲಿ ನಿಯೋಜಿಸಿರುವ ಸೇನೆ, ಹೊಸದಾಗಿ ರಚನೆಯಾಗಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶದ ಸ್ತಬ್ಧಚಿತ್ರಗಳು ಇದೇ ಮೊದಲ ಬಾರಿ ಪರೇಡ್​ನಲ್ಲಿ ಕಾಣಿಸಿಕೊಂಡವು. ಇನ್ನು ಏನ್​ ಇರ್ಲಿಲ್ಲ ಅಂತ ನೋಡೋದಾದ್ರೆ, 5 ದಶಕಗಳ ಬಳಿಕ ಮುಖ್ಯ ಅತಿಥಿ ಇಲ್ಲದೆ ಗಣರಾಜ್ಯೋತ್ಸವ ಪರೇಡ್ ನಡೀತು. ಸೇನಾ ಪರಿಣಿತರು ಮತ್ತು ಯೋಧರ ಬೈಕ್​ ಸ್ಟಂಟ್​ಗೆ ಅವಕಾಶವಿರಲಿಲ್ಲ. ಕೊರೋನಾ ಕಾರಣದಿಂದಾಗಿ ಪರೇಡ್​ನ ದೂರವನ್ನ ಕಡಿತಗೊಳಿಸಲಾಗಿತ್ತು. ರಾಜ್​ಪಥ್​ನಲ್ಲಿ ನಡೆದ ಪರೇಡ್​ನಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳು ಶಕ್ತಿ ಪ್ರದರ್ಶನ ನಡೆಸಿದ್ವು. ಜೊತೆಗೆ ವಿವಿಧ ಸ್ತಬ್ಧಚಿತ್ರಗಳು ಪ್ರದರ್ಶನವಾದ್ವು. ಟಿ-90 ಭೀಷ್ಮಾ ಟ್ಯಾಂಕ್, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಸ್ವಾಯತ್ತ ಉಡಾವಣೆ, ಪಿನಾಕಾ ಮಲ್ಟಿ ಲಾಂಚರ್ ರಾಕೆಟ್​ ಸಿಸ್ಟಂ, NSG, DRDO, NCCಯ ತಂಡಗಳು ಪರೇಡ್​ನಲ್ಲಿ ಹೆಜ್ಜೆ ಹಾಕಿದವು. ಬಳಿಕ ಲಡಾಖ್​Read More →

masthmagaa.com: ದೇಶದಲ್ಲಿ 72ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿರೋ ನಡುವೆಯೇ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಹಿಂಸಾರೂಪ ತಾಳಿದೆ. ಟ್ರಾಕ್ಟರ್ ರ್ಯಾಲಿಯನ್ನ ನಡೆಸಲು ಪೊಲೀಸರು ನಿಗದಿಪಡಿಸಿದ ರಸ್ತೆಗಳನ್ನ ಹೊರತುಪಡಿಸಿ ಬೇರೆ ರಸ್ತೆಗಳಿಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದೆ. ಪ್ರತಿಭಟನಾಕಾರರನ್ನ ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿ ಚಾರ್ಜ್​ ಮಾಡಿದ್ದಾರೆ. ಪ್ರತಿಭಟನಾಕಾರರು ಜೆಸಿಬಿ, ಕ್ರೇನ್​ಗಳನ್ನ ತಂದು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್​ಗಳನ್ನ ಕಿತ್ತೆಸೆದಿದ್ದಾರೆ. ಪೊಲೀಸ್ ವಾಹನಗಳ ಮೇಲೆ ಹತ್ತಿ ಆಕ್ರೋಶ ಹೊರಹಾಕಿದ್ದಾರೆ. ಕೆಲ ಪ್ರತಿಭಟನಾಕಾರರು ಕೈಯಲ್ಲಿ ಖಡ್ಗ ಹಿಡಿದುಕೊಂಡಿರೋದು ಕಂಡು ಬಂದಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ದೇಶಾದ್ಯಂತ 72ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಲಡಾಖ್​ನಲ್ಲಿ ಹೆಪ್ಪುಗಟ್ಟಿದ ನೀರಿನ ಮೇಲೆ ಐಟಿಬಿಪಿ (ಇಂಡೋ ಟಿಬೆಟನ್​ ಬಾರ್ಡರ್ ಪೊಲೀಸ್) ಯೋಧರು ರಾಷ್ಟ್ರಧ್ವಜವನ್ನ ಹಿಡಿದು ಹೆಜ್ಜೆ ಹಾಕಿದ್ದಾರೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಅನ್ನೋ ಘೋಷಣೆಗಳನ್ನ ಕೂಗಿ ಸಂಭ್ರಮಿಸಿದ್ದಾರೆ. ಯೋಧರ ಗುಂಪಿನಲ್ಲಿ ಮಹಿಳಾ ಯೋಧರು ಕೂಡ ಇದ್ದದ್ದು ಕಂಡುಬಂತು. -masthmagaa.com Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,102 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 117 ಸೋಂಕಿತರು ಮೃತಪಟ್ಟಿದ್ದಾರೆ. ಜೂನ್​ ಬಳಿಕ ದೃಢಪಟ್ಟ ಅತಿ ಕಮ್ಮಿ ಕೊರೋನಾ ಕೇಸ್ ಇದಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ 6 ಲಕ್ಷದ 76 ಸಾವಿರ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,53,587ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 15,000ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1 ಕೋಟಿ 3 ಲಕ್ಷದ 45 ಸಾವಿರ ದಾಟಿದೆ. ದೇಶದಲ್ಲಿ ಇನ್ನೂ ಕೂಡ 1 ಲಕ್ಷದ 77 ಸಾವಿರ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಗುಣಮುಖ ಪ್ರಮಾಣ 96.90 ಪರ್ಸೆಂಟ್ ಇದ್ದು, ಸಾವಿನ ಪ್ರಮಾಣ 1.43 ಪರ್ಸೆಂಟ್ ಇದೆ. ಜನವರಿ 25ರಂದು 7.25 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 19.30 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ದೇಶದಲ್ಲಿ ನಿನ್ನೆ 4.08 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದ್ದು, ಇದುವರೆಗೆ ಒಟ್ಟು 20.23 ಲಕ್ಷ ಜನರಿಗೆ ಲಸಿಕೆ ಹಾಕಿದಂತಾಗಿದೆ.Read More →

masthmagaa.com: ಒಂದು ಕುಟುಂಬದಿಂದ ಒಬ್ಬರು ಮಾತ್ರ ರಾಜಕಾರಕ್ಕೆ ಬರಬೇಕು. ಇಂಥಾದೊಂದು ಮಸೂದೆಯನ್ನ ಪ್ರಧಾನಿ ಮೋದಿ ಸಂಸತ್​ನಲ್ಲಿ ಮಂಡಿಸಬೇಕು ಅಂತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಒಂದ್ವೇಳೆ ಇಂತಹ ಕಾನೂನು ಏನಾದ್ರೂ ಜಾರಿಗೆ ಬಂದ್ರೆ 24 ಗಂಟೆಯೊಳಗೆ ನಾನು ರಾಜೀನಾಮೆ ನೀಡ್ತೀನಿ. ನಮ್ಮ ಕುಟುಂಬದಿಂದ ಮಮತಾ ಬ್ಯಾನರ್ಜಿ ಮಾತ್ರ ರಾಜಕಾರಣದಲ್ಲಿ ಇರ್ತಾರೆ ಅಂತ ಹೇಳಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಭಿಷೇಕ್ ಬ್ಯಾನರ್ಜಿ, ನಂದು ಮತ್ತು ಮಮತಾ ಬ್ಯಾನರ್ಜಿದು ವಂಶಪಾರಂಪರ್ಯ ರಾಜಕಾರಣ ಅಂತಾರಲಾ.. ಹಾಗಾದ್ರೆ ಬಿಜೆಪಿಯಲ್ಲಿ ಯಾರೂ ಇಲ್ವಾ? ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಗ ಶಾಸಕನಲ್ವಾ? ಕೈಲಾಶ್ ವಿಜಯವರ್ಗಿಯ ಅವರ ಮಗ ಶಾಸಕನಲ್ವಾ? ಸುವೇಂದು ಅಧಿಕಾರಿ ಅವರ ತಂದೆ ಮತ್ತು ಸಹೋದರ ಲೋಕಸಭೆ ಸದಸ್ಯರಲ್ವಾ? ಅಂತ ಪ್ರಶ್ನಿಸಿದ್ದಾರೆ. ಅಲ್ಲದೆ ಒಂದು ಕುಟುಂಬದಿಂದ ಒಬ್ಬರು ಮಾತ್ರ ರಾಜಕಾರಕ್ಕೆ ಬರಬೇಕು ಅನ್ನೋ ಕಾನೂನು ಜಾರಿಗೆ ತನ್ನಿ ನೋಡೋಣ ಅಂತ ಚಾಲೆಂಜ್ ಹಾಕಿದ್ದಾರೆ. -masthmagaa.com Share on: WhatsAppContactRead More →

masthmagaa.com: ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಬಗ್ಗೆ ಸಾಕಷ್ಟು ಚರ್ಚೆ ನಡೀತಿರುವಾಗಲೇ, ಭಾರತೀಯ ಬಳಕೆದಾರರನ್ನ ವಾಟ್ಸಾಪ್ ಕಂಪನಿ​ ಡಿಫ್ರೆಂಟ್​ ಆಗಿ ಟ್ರೀಟ್ ಮಾಡ್ತಿದೆ. ಯುರೋಪಿನ ಬಳಕೆದಾರರಕ್ಕಿಂತ ಭಿನ್ನವಾಗಿ ನೋಡ್ತಿದೆ ಅಂತ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್​ಗೆ ಹೇಳಿದೆ. ವಾಟ್ಸಾಪ್​ ಹೊಸ ಪ್ರೈವಸಿ ಪಾಲಿಸಿಯನ್ನ ಬಳಕೆದಾರರು ಒಪ್ಪಿಕೊಳ್ಳಲೇ ಬೇಕು. ಅದನ್ನ ಒಪ್ಪಿಕೊಳ್ಳದೇ ಇರಲು ಆಪ್ಷನ್ನೇ​ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋರ್ಟ್​ಗೆ ಈ ರೀತಿ ಹೇಳಿದೆ. ಹೊಸ ಪ್ರೈವಸಿ ಪಾಲಿಸಿಯನ್ನ ಪ್ರಶ್ನಿಸಿ ವಕೀಲರೊಬ್ರು ಅರ್ಜಿ ಸಲ್ಲಿಸಿದ್ರು. ಅದರ ವಿಚಾರಣೆ ವೇಳೆ ಈ ರೀತಿ ಹೇಳಿದೆ. ಅಂದ್ಹಾಗೆ ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಪ್ರಕಾರ, ಬಳಕೆದಾರರು ಅದನ್ನ ಒಪ್ಪಿಕೊಳ್ಳಬೇಕು ಅಥವಾ ಅಪ್ಲಿಕೇಶನ್​ನಿಂದ ಹೊರಬರಬೇಕು. ಆದ್ರೆ ಪಾಲಿಸಿಯನ್ನ ಒಪ್ಪಿಕೊಳ್ಳದೇ ವಾಟ್ಸಾಪ್​ನಲ್ಲಿ ಮುಂದುವರಿಯಲು ಅವಕಾಶವಿಲ್ಲ. ಹೊಸ ಪ್ರೈವಸಿ ಪಾಲಿಸಿ ಒಪ್ಪಿಕೊಂಡ್ರೆ, ಫೇಸ್​ಬುಕ್​ ಒಡೆತನದ ಅಥವಾ ಥರ್ಡ್​ ಪಾರ್ಟಿ ಅಪ್ಲಿಕೇಶನ್​ಗಳ ಜೊತೆ ನಿಮ್ಮ ಡೇಟಾ ಶೇರ್ ಮಾಡಲು ವಾಟ್ಸಾಪ್​ಗೆ ಅನುಮತಿ ಕೊಟ್ಟಂತಾಗುತ್ತೆ. ಆದ್ರೆ ಯುರೋಪಿನ ದೇಶಗಳಲ್ಲಿ ಹೀಗಿಲ್ಲ. ಇದೇ ಈಗ ವಿವಾದಕ್ಕೆ ಗುರಿಯಾಗಿದ್ದು,Read More →