ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ
masthmagaa.com: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟು, ಮಸೀದಿ ನಿರ್ಮಾಣಕ್ಕೆ ಉತ್ತರಪ್ರದೇಶ ಧನ್ನಿಪುರ್ನಲ್ಲಿ ಜಾಗ ನೀಡಲಾಗಿತ್ತಲಾ.. ಇವತ್ತು ಆ ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 72ನೇ ಗಣರಾಜ್ಯೋತ್ಸವ ದಿನವಾದ ಇವತ್ತು ಧ್ವಜಾರೋಹಣ ನೆರವೇರಿಸಿ, ಗಿಡವನ್ನ ನೆಡುವ ಮೂಲಕ ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಮಸೀದಿಯ ನಿರ್ಮಾಣ ಕೆಲಸವನ್ನ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆಯಂದೇ ಶುರು ಮಾಡೋದಾಗಿ ಈ ಹಿಂದೆಯೇ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ಹೇಳಿತ್ತು. ಅದರಂತೆ ಇವತ್ತು ಚಾಲನೆ ಕೊಡಲಾಗಿದೆ. ಮಸೀದಿ ನಿರ್ಮಾಣ ಆಗ್ತಿರೋ ಜಾಗವು ರಾಮ ಜನ್ಮಭೂಮಿಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿದೆ. -masthmagaa.com Share on: WhatsAppContact Us for AdvertisementRead More →